ಓ ಮನುಜ.
~~~~~~~~
ಗಿಡದೆಲೆಗಳು ಉದುರಿಹೋಗಿ ಇಲ್ಲ ಗಿಡದಲ್ಲೊಂದೂ ಎಲೆ
ನಸು-ನಸುಕಿನಲ್ಲೆದ್ದು ನೋಡಿದರೆ ಕಾಕಾಳಿಯೇರಿ
ತರುವಿನ ಮೇಲಿದ್ದ ಕಾಗೆಗಳುಂ ಕಾ..ಕಾss ಎಂದು ಶಬ್ದಮಂ
ಮಾಡುತಿರಲು,ನಿದ್ರಾಭಂಗವಾಯಿತೆಂದು,ಊರ ಜನರೆಲ್ಲ
ಅಲ್ಲಿ ಬಂದು ಸೇರಿ ಶಪಿಸಿ,ಬೈಯ್ದು ತಮ್ಮ ತಮ್ಮ
ಗೃಹಗಳಿಗೆ ಪೋದೊಡೆ,ಕಾಗೆಗಳುಂ ಚಿಂತಿಸುತಿರಲು
ಅಯ್ಯೋ! ಏನಿದು ಮನುಜ ಜಾತಿ, ನಮ್ಮಂಥ
ಕೀಳು ಪಕ್ಷಿಗಳು,ಇಲ್ಲಿ ದಿನ ಬೈಯಿಸಿಕೊಂಡು
ವಾಸಿಸಬಾರದೆಂದು ನಿಶ್ಚಯಿಸಿ,ಚದುರಿತು ಕಾಗೆ
ಗುಂಪು ಕಂಡ ಕಂಡಲ್ಲಿ ಇದನ್ನು ಕಂಡ ಊರ ಜನರು
ಸೋಗಮದಿಂದ ಇರತೊಡಗಿದರು,ಆದರೇನು?
ಎಲ್ಲ ಕಾಗೆಗಳ ವಾಸ ಎಲ್ಲಿರುವವೋ ಏನು?
ಯಾರೂ ಇದರ ಬಗ್ಗೆ ಚಿಂತಿತರಾಗದೆ
ತಮ್ಮ ತಮ್ಮಗಳ ಬಗ್ಗೆ ಚಿಂತಿಸುತಿರಲು
ಪಕ್ಷಿ ದೇವನು-ಪ್ರತ್ಯಕ್ಷನಾಗಿ(ಖಗ ದೇವ)
ಎಲ್ಲದರಲ್ಲೂ ಕರುಣೆ ಇಡು ಅವೇ,ನಿನಗೆ
ದಾರುಣ ಸ್ಥಿತಿಯೊಳ್ ನಿಮಗೆ ಒಳ್ಳೆಯದನ್ನು
ಮಾಡುವುದೆಂದೊಡೆ, ಪ್ರತಿಯೊಬ್ಬರಿಗೂ ನೀತಿ
ಸ್ಪರುಶವಾಗಿ ತಮ್ಮ ದುಶ್ಚಟಗಳನ್ನು ಬಿಡಲು
ಮತ್ತೆಂದಿಗೂ ಊರಜನರು ಯಾರಿಗೂ ಕಾಟ ಕೊಡಲಿಲ್ಲ
ತನ್ನೊಬ್ಬನ ಚಿಂತೆಯನ್ನು ಬಿಟ್ಟು ಪರರ
ದುಃಖದಲ್ಲಿಯೂ ಬಾಗಿಯಾಗಬೇಕೆಂದು ನಮ್ಮ ನೀತಿ
ಮಂಜರಿ ಹೇಳುತ್ತದೆ(ತಿಳಿಸುತ್ತದೆ) ಓ ಮನುಜ!
-ಬಿ.ರಾಮಪ್ರಸಾದ
ಭಟ್, ಹೊಸಪೇಟೆ. (ಪುಟ:-133, ಸ್ನೇಹ ಸಮ್ಮಿಲನ ಕವನ ಸಂಕಲನ.)
No comments:
Post a Comment