ಅವಳ ಸಾವಿನ ಸುತ್ತ…
~~~~~~~~~~~~~~~
ಅವಳು ಸತ್ತಿದ್ದಳು
ಯಾವೊಂದು ಸುಳಿವಿರದೆ
ಅತ್ತಿದ್ದವು ಮಕ್ಕಳೆರಡು
ಬಿಕ್ಕಿ ಬಿಕ್ಕಿ ಕಾರಣವೇ ತಿಳಿಯದೆ!
ದುಗುಡದ ಮಡುವಿನಲ್ಲಿ
ನರಳುತ್ತಿದ್ದವು ಹತ್ತಾರು
ನಿಜವೆಷ್ಟೋ ಸುಳ್ಳೆಷ್ಟೋ
ಅವಳು ಸತ್ತಿದ್ದಂತೂ ನಿಜ!
ಆತುರದ ಸಾವು ಅವಳಿಗೇಕೆ
ಬಂದಿತ್ತೋ? ಹೇಳಲೊಲ್ಲರು-
ಊಹಾ-ಪೋಹಗಳೇ ಅಲ್ಲಿ
ನಾಲಿಗೆಯ ಮೇಲೆ ಹರಿದಾಡುತ್ತಿತ್ತು
ಕಟ್ಟಿದ ಕಟ್ಟಿಕೊಂಡ ಟೊಂಕ ಕಟ್ಟಿ
ನಿಂತ ಎಂಟೆದೆ ಭಂಟ ಗಂಡನೋ!
ಎಲ್ಲಿದ್ದನೋ ಏನೋ ಅವನು
ತಿಳಿದಿರಲಿಲ್ಲ ಯಾರಿಗೂ-ಅವ್ನು ಬರುವನೋ?!
ಸಾವಿನ ಆಘಾತವೇ ಹೀಗೆ
ಬಂದು ಬಸವಳಿಸಿಬಿಡುವುದು
ದಿಢೀರನೇ ಸಂತಸದ ಕಳೆಯ ಸರಿಸಿ
ತಿಳಿಯದೇ ಮೇಳೈಸಿ ಬಿಡುವುದು.
ಯಾರೂ ಏನನೂ ಮಾಡಲಾರರು
ಸಾವೆಂಬುದು ಶತಸಿದ್ಧವಾಗಿ ಬಂದಾಗ
ಮಾಡುವುದಕ್ಕಾದರೂ ಏನೂ
ಉಳಿದಿರುವುದಿಲ್ಲ ಯಾರ ಕೈಯಲ್ಲೂ!
--ಬಿ.ರಾಮಪ್ರಸಾದ ಭಟ್ ಹೊಸಪೇಟೆ.
17:02- ದಿನಾಂಕ:- 02-08-2020.
No comments:
Post a Comment